ಗುರುವಾರ, ಏಪ್ರಿಲ್ 28, 2011

ನಾನು ಮತ್ತು ನನ್ನ ಏಪ್ರಿಲ್ ತಿಂಗಳಿನ ಅನುಭವಗಳು...

ಈ ವರ್ಷದ ಏಪ್ರಿಲ್ನಷ್ಟು ಕೆಟ್ಟ ಮಾಸ ನನಗೆ ಯಾವ್ದು ಇರ್ಲಿಲ್ವೇನೋ... ದೇವರು ಕಷ್ಟ ಕೊಟ್ರೆ ಒಂದರ ಹಿಂದೆ ಇನ್ನೊಂದು ಕೊಡ್ತಾನೆ ಅನ್ನೋಕೆ ಈ ನನ್ನ ಕಥೆ ಎಷ್ಟನೆ ಸಾಕ್ಷಿನೋ ಆ ದೇವರಿಗೆ ಗೊತ್ತು.. ಕಥೆ ಕೇಳಿ...

ನನ್ನ BFA assignments ಏಪ್ರಿಲ್ನಲ್ಲಿ submit ಮಾಡ್ಬೇಕು ಅಂತ college ಇಂದ ಹೇಳಿದ್ರು... ನಾನು ಬಹಳ ತರಾತುರಿಯಲ್ಲಿ ಮಾಡ್ತಾ ಇದ್ದೆ... office ಲಿ ಇದ್ರೆ ಯಾವಗಪ್ಪ assignment ಮಾಡೋದು ಅನ್ನೋ tension... ಇವತ್ತು ಮುಗಿಸಬೇಕು.. ಇನ್ನೆರಡು ದಿನಕ್ಕೆ ಮುಗಿಸಬೇಕು ಅಂತ.. ಅಂತು ಇಂತೂ submit ಮಾಡಕ್ಕೆ 2 ದಿನ ಮುಂಚೆ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟೆ...ಮೈಸೂರಿಗೆ ಹೋಗಕ್ಕೆ packing ಎಲ್ಲ ಆಯ್ತು... ಪುತ್ತೂರು ಜಾತ್ರೆ ನೋಡಿಕೊಂಡು ಹಾಗೆ ನನ್ನ ಗೆಳತಿ ರಚನಾ ಜೊತೆ ಮೈಸೂರ್... 10 ದಿನ office ಮನೆ ಅಡುಗೆ ಏನು ಇಲ್ಲ... ಅಬ್ಬಬ್ಬ್ಬ.. ನನ್ನ ಖುಷಿಗೆ ಎಲ್ಲೇನೆ ಇಲ್ವೇನೋ ಅನ್ನೋಷ್ಟು ಸಂತಸ... ಅಷ್ಟೇ ನನ್ನ ಪಾಲಿನ ಖುಷಿ ಅನ್ಸುತ್ತೆ... ಆಮೇಲೆ ಏನಾಯ್ತು ಕೇಳಿ..

ಪುತ್ತೂರು ಜಾತ್ರೆ ಇದೆ ಅಂತ ಒಂದು ತಿಂಗಳು ಮುಂಚೆನೇ ನನ್ನ ಮತ್ತು ನನ್ನವರ ಹೆಸರಲ್ಲಿ train ticket book ಮಾಡಿದ್ವಿ.. ಅದ್ನ book ಮಾಡ್ಸಕ್ಕೆ ನನ್ನವರನ್ನ ಎಷ್ಟು ಪೀಡಿಸಿದ್ನೋ ಏನೋ... ಕೊನೆಗೂ ನಾವು ಹೊರೋಡೋ ದಿನ ಘಳಿಗೆ ಎಲ್ಲ ಬಂತು... ಹೊರಟ್ವಿ... ಮಳೆ... ಬರೋದಿಲ್ಲ ಅನ್ನೋ ಧ್ಯರ್ಯದಲ್ಲಿ ಮನೆ ಇಂದ ಹೊರಗೆ ಕಾಲಿಟ್ಟಿದ್ದೆ ತಡ.. ಶುರು ಆಯ್ತು ನೋಡಿ... ಸರಿ ಮನೆ ಬೀಗ ತೆಗೆದು ಕೊಡೆ ತೊಗೊಂಡು ಆಟೋ ಹಿಡಿದು ಹೊರಟ್ವಿ... ಹೋಗ್ತಾ ಹೋಗ್ತಾ train ಎಲ್ಲಿ miss ಆಗತ್ತೋ.. ಮತ್ತೆ tension... ಚಿತ್ರಕಲ ಪರಿಷತ್ ತನಕ ಆಟೋ ಬಂತು... ತಕ್ಷಣ ನನಗೆ ಹೊಳೆದದ್ದು... ಕೊಡೆ ತೊಗೊಳ್ಳೋ ಆತುರದಲ್ಲಿ assignment book ಮನೇಲೆ ಮರೆತೇ... ಅಳು ಬಂದೆ ಬಿಡ್ತು.. ಥು.. ನನಗೇನಾಗಿದೆ ಅಂತ ನನ್ನ ನಾನು ಎಷ್ಟೋ ಬ್ಯೆಕೊಂಡೆ.... ನನ್ನವರು ಸಮಾಧಾನ ಮಾಡಿದ್ರು... train miss ಆದರು ತೊಂದರೆ ಇಲ್ಲ ಮನೆಗೆ ಹೋಗಿ book ತೊಂಗೊಂಡು busಲ್ಲೇ ಹೋದ್ರೆ ಆಯ್ತು ಅಂತ ವಾಪಸ್ ಬಂದ್ವಿ... bus stand ಗೆ ಹೋದ್ರೆ ಯಾವ ಪುತ್ತೂರು busಲ್ಲು seat ಖಾಲಿ ಇಲ್ಲ... ಕೊನೆಗೆ ಮಂಗಳೂರಿನ ಯಾವ್ದೋ volvo ಲಿ VIP seat ಕೊಟ್ರು.. VIP seat... ಪರವಾಗಿಲ್ಲ ನಮ್ ಟೈಮ್ ಅಷ್ಟೊಂದು ಕೆಟ್ಟಿಲ್ಲ ಅಂತ ಹಾಯಾಗಿ ಮಲಗಿದೆವು... ಬೆಳಗ್ಗೆ 5.30ಗೆ ಎಚ್ಚರ ಆಗಿ ನೋಡಿದರೆ... BC road.. ನಾವು ೧ ಗಂಟೆ ಮುಂಚೆನೆ ಇಳಿ ಬೇಕಿತ್ತು... ಅಯ್ಯೋ ಹತ ವಿಧಿಯೇ ಅಂತ ಅಲ್ಲೇ ಇಳಿದು ಪುತ್ತೂರಿಗೆ ಹೋಗೋ KSRTC bus ಗಾಗಿ ಕಾದು... ಕೊನೆಗೂ ಒಂದು bus ಬಂತು.. ಹತ್ತಿ ಮನೆಗೆ ಹೋಗಿ ಬೀಳುವಷ್ಟರಲ್ಲಿ ಸುಸ್ತಾಗಿತ್ತು... ಆದರೂ ಏನೋ ಹುರುಪು... ಜಾತ್ರೆ ಅಲ್ವಾ... ಅವತ್ತು ಮಹಾಲಿಂಗೇಶ್ವರ ದೇವಸ್ತಾನಕ್ಕೆ ಭಂಡಾರ ತರುವ ದಿನವಂತೆ.... ಅದ್ಧೂರಿಯಾಗಿತ್ತು.. ರಾತ್ರಿ ಹೋಗಿ.. ಚುರಮುರಿ ಐಸ್ ಕ್ರೀಂ.. ಎಲ್ಲ ತಿಂದು... ಇದ್ದ ಬದ್ದ ಅಂಗಡಿ ಎಲ್ಲ ಸುತ್ತಾಡಿ... 12 ಗಂಟೆಗೆ ಮನೆಗೆ ಹಿಂತುರಿಗಿ ಹಾಯಾಗಿ ಮಲಗಿದೆವು...

ಮರುದಿನ ನಾನು ಮೈಸೂರ್ ಗೆ ಹೊರಟೆ... ನನ್ನ ಪ್ರೀತಿಯ ಮಾವ ವಿಷು ಹಬ್ಬದ ಪ್ರಯುಕ್ತ ಸೀರೆ ಕೊಟ್ರು... ನನಗಂತೂ ಖುಷಿಯೋ ಖುಷಿ... ಎಲ್ಲರಿಗೂ ನಮಸ್ಕಾರ ಮಾಡಿ ಉಪ್ಪಿನಂಗಡಿಗೆ ಹೋದ್ವಿ... bus ಬಂತು.. ನನ್ನ ಗೆಳತಿ ರಚನಾ ನಗು ಮುಖದೊಂದಿಗೆ ನನ್ನ ನೋಡಿ ಹತ್ತು ಅಂದ್ರು.. ನನ್ನ ಗಂಡನಿಗೆ ta ta ಹೇಳಿ ಹೊರಟೆವು... bus ಗುಂಡ್ಯ ತಲುಪಿತೋ ಇಲ್ವೋ.. accell belt ಕಟ್ಟಾಗಿ ಕಾಡಿನ ಮಧ್ಯ tussss.... ಅಂತ ನಿಂತೆ ಹೋಯ್ತು.... ಸರಿ ನಮಗೂ ಖುಷಿ ಆಯ್ತು... ಸ್ವಲ್ಪ ಹೊತ್ತು ಅಂತ ಅಲ್ಲಿ ಇಲ್ಲಿ ಓಡಾಡಿ ಸ್ವಲ್ಪ ಚಿತ್ರ ಬಿಡಿಸಿ.. ರವಿ ಅಣ್ಣ ಮಾಡಿದ್ದ 7cup ಸ್ವೀಟ್ ತಿಂದು... ಕಾದ್ವಿ ಕಾದ್ವಿ... ಯಾವ ಮೈಸೂರ್ bus ಪತ್ತೇನೆ ಇಲ್ಲ... ಹಾಗೆ 2 ಗಂಟೆ ಕಳೆದ ಮೇಲೆ ರಾಜಹಿಂಸೆ bus ಬಂತು... ಆದ್ರೆ seat ಇಲ್ಲ :( ಸರಿ ಇನ್ನೇನ್ ಮಾಡೋದು... ಹಾಸನದ ತನಕ ನಿಂತುಕೊಂಡೆ ಶಿರಾಡಿ ಘಾಟ್ ಸಕಲೇಶಪುರ ಎಲ್ಲ ಇಳಿದೆವು... ಊಟ ಇಲ್ಲ ನಿದ್ರೆ ಇಲ್ಲ... seat ಕೂಡ ಇಲ್ಲ.... ಮೈಸೂರ್ ತಲುಪವ ಹೊತ್ತಿಗೆ ಪ್ರಾಣ ಗಂಟಲಲ್ಲಿ ಇತ್ತು... ಮೈಸೂರ್ಗೆ ಬಂದ ಮತ್ತೆ KSOU hostel ಇದೆ... ಆರಾಮಾಗಿ ಸ್ನಾನ ಮಾಡಿ ಮಲಗಬಹುದು ಅನ್ನೋ ಮಹದಾಸೆ ನಮ್ಮದು... ಅಲ್ಲಿ ನೋಡಿದರೆ ರೂಂ ಇಲ್ಲ... ಅಲ್ಲದೆ ಆ warden ನ ಕಿತ್ತೋಗಿರೋ ಒಂದು sentense "I M not helpless"(i M helpless ಅನ್ನೋಕೆ ಹಾಗಂದಿದ್ದು ಅವ್ನು..ನಮ್ಮ government ಗತಿ ಇದು.. ಲಂಚ ಕೊಟ್ರೆ ಎಂಥ ಕಿತ್ತೊಗಿರೋನು ಏನ್ ಬೇಕಾದರು ಆಗ್ತಾ ಅನ್ನೋಕೆ ಉದಾಹರಣೆ) ಇವನ ಮುಖ ಮುಚ್ಚ ಅನ್ನೋದೊಂದು ಬಾಕಿ.... ನಮ್ಮನ್ನೇ ನಾವು ಶಪಿಸುತ್ತ... PG ಗಾಗಿ ಹುಡುಕಾಟ ಶುರು ಆಯ್ತು... ಒಂದು PG ಲಿ ವಾಸನೆ ಆದ್ರೆ ಇನ್ನೊಂದರಲ್ಲಿ ಜಾಗನೇ ಇಲ್ಲ... ಮತ್ತೊಂದು ಮೋರಿ ಪಕ್ಕ... ಅಂತು ಇಂತೂ ೮ ಗಂಟೆಗೆ PG ಸಿಕ್ತು ಊಟ ತಿಂಡಿ ಎಲ್ಲ ಅಲ್ಲೇ ಇದೆ... ಸದ್ಯ ಪುಣ್ಯಾತ್ಮರು ಹೇಗೋ ಸಿಕ್ಕಿದ್ರಲ್ಲ ಅಂತ PG ಹೊಕ್ಕು ಮಲಗಿದ್ವಿ...

ನಂತರ ದಿನಕ್ಕೊಂದು ಮನಸ್ತಾಪ.. ಅವಳು bathroom ಒಳಗೆ ಹೋದ್ರೆ ಬರೋದೆ ಇಲ್ಲ... 5 minutes yar ಅಂತಲೇ ಅರ್ಧ ಗಂಟೆ ಮಾಡ್ತಾಳೆ... ಇವಳು ರಾತ್ರಿ light ಹಾಕ್ತಾಳೆ... ನನ್ ಗಂಡ phone ಮಾಡ್ಲಿಲ್ಲ... ನಿನ್ ಗಂಡ ಮಾಡಿದ್ನಾ.. ಇವತ್ತು ನಮ್ ಕ್ಲಾಸ್ ಹಿಂಗಾಯ್ತು... dean ಇದು ಅಂದ್ರು... ಸರ್ ಅದು ಅಂದ್ರು.. ಅನ್ನೋ ಮಧ್ಯೆ ಚಾಮುಂಡಿ ಬೆಟ್ಟಕ್ಕೆ ಹೊರಟ್ವಿ... ಬೆಟ್ಟಕ್ಕೆ bus enter ಆಯ್ತೋ ಇಲ್ವೋ.. ಮತ್ತೆ ಮಳೆ.... ಹತ್ತಿದ bus ಇಳೀದೇನೆ.. ಅಲ್ಲೇ ಮದ್ದೂರು ವಡೆ ತಿಂದು.. ಮೈಸೂರ್ ಗೆ ವಾಪಾಸ್ ಆಗಿ ಬೆಚ್ಚಗೆ ಮಲ್ಕೊಂಡೆವು....

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ ಅನ್ಸೋಕ್ಕೆ ಶುರು ಆಯ್ತು ಎಲ್ಲರಿಗು.. ಗಂಡನ್ನ ನೋಡ್ಬೇಕು.. ಅಮ್ಮನ್ನ ನೋಡ್ಬೇಕು... ಒಬ್ಬೊಬ್ರೆ ಖಾಲಿ ಆಗ್ತಾ ಬಂದ್ರು... ಅಂತು ಇಂತೂ ಹೊರೋಡೋ ದಿನ... ಈಗ ಹೋಗಿ office ಮನೆ ಅಡುಗೆ ಅನ್ನೋ ಬೇಜಾರು ಒಂದು ಕಡೆ... ಸದ್ಯ ಮನೆಗೆ ಹೋಗ್ತಾ ಇದ್ದಿವಲ್ಲ ಅನ್ನೋ ಖುಷಿ ಇನ್ನೊಂದು ಕಡೆ ಇಟ್ಕೊಂಡು ರಾತ್ರಿ ಬಂದು ಮನೆಗೆ ಬಿದ್ವಿ....

ಇಷ್ಟೆಲ್ಲಾ ಆದದ್ದು ಕೇವಲ 12 ದಿನಗಳಲ್ಲಿ ಗೊತ್ತ??? ಈಗ ಹೇಳಿ ನನ್ನಂತೋಳಿಗೆ ಇಷ್ಟೆಲ್ಲಾ ಕಷ್ಟ ಆ ದೇವರು ಕೊಡಬಹುದ???

5 ಕಾಮೆಂಟ್‌ಗಳು:

  1. @anamadheya avre.. Ganda andre bejaaru anlilla... 10 dina alli yaaru iralla andiddu.. sariyaagi odi... :P

    ಪ್ರತ್ಯುತ್ತರಅಳಿಸಿ
  2. easstu kassta patti assignment submitmaadhrri.....easstu sikkidhhu great kannrri...
    Ganesh Shastri

    ಪ್ರತ್ಯುತ್ತರಅಳಿಸಿ