ಶುಕ್ರವಾರ, ಏಪ್ರಿಲ್ 8, 2011

ಭಾವಗೀತೆ ೭ - ಬಾ ಇಲ್ಲಿ ಸಂಭವಿಸು

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ

ಮಣ್ಣಾಗಿ ಮರವಾಗಿ ಮಿಗವಾಗಿ ಕಗವಾಗೀ...
ಮಣ್ಣಾಗಿ ಮರವಾಗಿ ಮಿಗವಾಗಿ ಕಗವಾಗಿ
ಭವ ಭವದಿ ಭತಿಸಿಹೇ ಭವತಿ ದೂರ
ನಿತ್ಯವೂ ಅವತರಿಪ ಸತ್ಯಾವತಾರ || ಬಾ ಇಲ್ಲಿ ||

ಮಣ್ಣ್ ತನಕೆ ಮರತನಕೆ ಮಿಗತನಕೆ ಕಗತನಕೇ..
ಮಣ್ಣ್ ತನಕೆ ಮರತನಕೆ ಮಿಗತನಕೆ ಕಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರ
ಮೂಡಿ ಬಂದೆನ್ನ ನರ ರೂಪ ಚೇತನದೀ
ಮೂಡಿ ಬಂದೆನ್ನ ನರ ರೂಪ ಚೇತನದೀ
ನಾರಯಣ ಪತ್ತೆ ದಾರಿ ದೂರ
ನಿತ್ಯವೂ ಅವತರಿಪ ಸತ್ಯಾವತಾರ || ಬಾ ಇಲ್ಲಿ ||

ಅಂದು ಅರಮನೆಯಲ್ಲಿ ಮತ್ತೆ ಸೆರೆಮನೆಯಲ್ಲಿ
ಅಲ್ಲಿ ಗೂಡುಕಟ್ಟಿಯಲಿ ಇಲ್ಲಿ ಕಿರುಗುಡಿಸಲಲಿ
ಅಂದು ಅರಮನೆಯಲ್ಲಿ ಮತ್ತೆ ಸೆರೆಮನೆಯಲ್ಲಿ
ಅಲ್ಲಿ ಗೂಡುಕಟ್ಟಿಯಲಿ ಇಲ್ಲಿ ಕಿರುಗುಡಿಸಲಲಿ
ದೇಶ ದೇಶ ವಿದೇಶ ವೇಷಾಂತರವನಾಂತು
ವಿಶ್ವ ಸಾರಥಿಯಾಗಿ ನೀಯಾರದವನೆಂದು
ಛೋದಿಸಿರುವೆಯೊ ಅಂತರ್ಶುದ್ಧಿ ಲೋಲಾ...
ಅವತರಿಸು ಬಾ...
ಅವತರಿಸು ಬಾ...
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ರದಲಿ
ಹೇ ದಿವ್ಯ ಸಚ್ಚಿದಾನಂದ ಶೀಲ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ

1 ಕಾಮೆಂಟ್‌: