ಸೋಮವಾರ, ಸೆಪ್ಟೆಂಬರ್ 20, 2010

ಮನಸ್ಸು-ಸಂಬಂಧ-ಕಾಲ ಹೀಗೆ ಏನೇನೋ..

ಸಂಬಂಧದ ಕೊಂಡಿಗಳು ಹರಿದಾಗ ಆಗುವ ನೋವಿಗಿಂತಲೂ, ಅದನ್ನು ನೆನೆಸಿ ಆಗುವ ನೋವೆ ಹೆಚ್ಚು ಯಾತನೆ ಕೊಡುತ್ತದೆ
ಮತ್ತೆ ಬೆಸೆಯುವ ಗೀಳಿಗೇಕೆ ನಾವು ಬೀಳುವುದಿಲ್ಲ?? ಮತ್ತೆ ಹರಿದರೆ ಎಂಬ ಆತಂಕವೇ ಮನದಲ್ಲಿ ಮನೆ ಮಾಡುತ್ತದೆ

ಸಮಯದ ಹಾದಿಯಲ್ಲಿ ಮಾಸಿಹೋದ ಎಷ್ಟೋ ಹೆಜ್ಜೆಗಳು ತನ್ನ ಅಸ್ತಿತ್ವವನ್ನು ಮತ್ತೆ ಹುಡುಕ ಹೊರಟಿದೆ
ನೆನಪಿನಂಗಳದಲ್ಲಿ ಅರಳಿದ ಹೂಗಳನ್ನು ಮಾತ್ರ ಕಣ್ಣಲ್ಲಿ ಮೂಡಿಸಿ, ಚುಚ್ಚಿದ ಮುಳ್ಳುಗಳ ನೋವನ್ನು ಇದೇನು ಮಹಾ ಎಂದು ಮರೆಸಿದೆ.

ಈ ಕ್ಷಣದ ಕೋಪವ ಹಾಗೆ ಬಿಡುವ.. ಕಾಲವೇ ಅದಕ್ಕೆ ಉತ್ತರಿಸಿ ನಮ್ಮ ನೋವನ್ನ ಮರೆಸೀತು
ಸಂಬಂಧಗಳ ಬೆಸೆಯಿಸಿ... ಕಲಾಯ ತಸ್ಮೈ ನಮಃ ಎಂದು ಮತ್ತೆ ಕಾಲವು ತನ್ನ ಹಿರೆಮೆಯನ್ನು ತೋರಿಸೀತು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ