ಬುಧವಾರ, ಜೂನ್ 8, 2011

ಭಾವ ಗೀತೆ ೧೦ - ಭಾವ ಭೃಂಗ


ಭಾವ ಭೃಂಗ ಹೂದೋಟದ ಬೇಲಿಯ ದಾಟಿ ಬಾರೋ ನನ್ನೆದೆ ಬಳಿಗೆ ||೨||
ಹೂವು ಸಾವಿರ ಹಾದಿ ತಪ್ಪಿದರು ಕೇಳುತಿರಲಿ ಮೊರೆ ಕಿವಿಯೊಳಗೆ ||೨||

ಹೂಗಳ ಹೂನಗೆಗೆದೆಗೆಡಬೇಡ ಕಂಪಿನ ಕುಣಿಕೆಗೆ ಸಿಲುಕದಿರು ||೨||
ಯಾರೇ ಕೇಳಲಿ ಎಷ್ಟೇ ಕಾಡಲಿ ||೨||
ನಲ್ಲೆಯ ಹೆಸರನು ಹೇಳದಿರು ||೨|| ||ಭಾವ ಭೃಂಗ||

ಧವಳ ನೀಲಿ ಕನಕಾಂಬರಿ ಕೆಂಪು ಹೂದೋಟದ ಕಿರು ಹಾದಿಯಲಿ ||೨||
ಸೇವಂತಿಗೆ ಮಲ್ಲಿಗೆ ಮಂದಾರ ||೨||
ಸಾವಿರ ಹೆಸರಿವೆ ಯಾದಿಯಲಿ||೨|| ||ಭಾವ ಭೃಂಗ||

ಹೂವು ಹಲವು ದುಂಬಿಯು ಹಲವು ಆದರೆ ಏಕಾಂಗಿ ನನ್ನೊಲವು ||೨||
ಬಂದರೆ ನೀನು ನನ್ನೆಲೆ ಮನೆಗೆ ||೨||
ಚಂದ್ರೋದಯ ಅರೆ ಕ್ಷಣದೊಳಗೆ||೨|| ||ಭಾವ ಭೃಂಗ||

ಕವಿ: ಹೆಚ್ ಎಸ್ ವೆಂಕಟೇಶ್ ಮೂರ್ತಿ