ಬುಧವಾರ, ಜೂನ್ 8, 2011

ಭಾವ ಗೀತೆ ೧೦ - ಭಾವ ಭೃಂಗ


ಭಾವ ಭೃಂಗ ಹೂದೋಟದ ಬೇಲಿಯ ದಾಟಿ ಬಾರೋ ನನ್ನೆದೆ ಬಳಿಗೆ ||೨||
ಹೂವು ಸಾವಿರ ಹಾದಿ ತಪ್ಪಿದರು ಕೇಳುತಿರಲಿ ಮೊರೆ ಕಿವಿಯೊಳಗೆ ||೨||

ಹೂಗಳ ಹೂನಗೆಗೆದೆಗೆಡಬೇಡ ಕಂಪಿನ ಕುಣಿಕೆಗೆ ಸಿಲುಕದಿರು ||೨||
ಯಾರೇ ಕೇಳಲಿ ಎಷ್ಟೇ ಕಾಡಲಿ ||೨||
ನಲ್ಲೆಯ ಹೆಸರನು ಹೇಳದಿರು ||೨|| ||ಭಾವ ಭೃಂಗ||

ಧವಳ ನೀಲಿ ಕನಕಾಂಬರಿ ಕೆಂಪು ಹೂದೋಟದ ಕಿರು ಹಾದಿಯಲಿ ||೨||
ಸೇವಂತಿಗೆ ಮಲ್ಲಿಗೆ ಮಂದಾರ ||೨||
ಸಾವಿರ ಹೆಸರಿವೆ ಯಾದಿಯಲಿ||೨|| ||ಭಾವ ಭೃಂಗ||

ಹೂವು ಹಲವು ದುಂಬಿಯು ಹಲವು ಆದರೆ ಏಕಾಂಗಿ ನನ್ನೊಲವು ||೨||
ಬಂದರೆ ನೀನು ನನ್ನೆಲೆ ಮನೆಗೆ ||೨||
ಚಂದ್ರೋದಯ ಅರೆ ಕ್ಷಣದೊಳಗೆ||೨|| ||ಭಾವ ಭೃಂಗ||

ಕವಿ: ಹೆಚ್ ಎಸ್ ವೆಂಕಟೇಶ್ ಮೂರ್ತಿ 

2 ಕಾಮೆಂಟ್‌ಗಳು:

  1. ನನ್ನ ಇಷ್ಟದ ಕವಿಯ ನನ್ನಿಷ್ಟದ ಕವಿತೆ. ಇಷ್ಟದ ಗಾಯಕಿ ಪಲ್ಲವಿ ಇದನ್ನ ಹಾಡಿದಾರೆ. :-)

    ಬೈದಿವೇ, ಅದು 'ಸಾವಿರ ಹೆಸರಿವೆ ಹಾದಿಯಲಿ' ಅಲ್ಲ, 'ಯಾದಿಯಲಿ' (ಪಟ್ಟಿಯಲ್ಲಿ). ಹಾಗೇ, 'ಬಂದರೆ ನೀನು ನನ್ನೆಲೆ ಮನೆಗೆ' - 'ನನ್ನೆದೆ' ಅಲ್ಲ.

    ಲಿರಿಕ್ಸ್ ಜೊತೆ ಕವಿಯ ಹೆಸರನ್ನೂ ಹಾಕಿ.

    ಪ್ರತ್ಯುತ್ತರಅಳಿಸಿ
  2. ಅಯ್ಯೋ ನೆನಪೇ ಆಗ್ತಿಲ್ಲಾ ಅನ್ನೋ ಸಮಸ್ಯೆಯೇ ಇಲ್ಲಾ.....
    ಏಕೆಂದ್ರೆ ನಿಮ್ಮ blog ಇದ್ಯಾಲ್ಲಾ.....

    ಭಾವಗೀತೆಗಳಿಗೆ ಕೊರತೆ ಇಲ್ಲಾ ಬಿಡಿ....

    ಪ್ರತ್ಯುತ್ತರಅಳಿಸಿ