ಗುರುವಾರ, ಆಗಸ್ಟ್ 4, 2011

ಎಲ್ಲಿ ಎಲ್ಲಿ ರಮ್ಯತಾಣ - ಭಾವಗೀತೆ ೧೧

ಕವಿ: ನಿಸಾರ್ ಅಹ್ಮೆದ್

ಎಲ್ಲಿ ಎಲ್ಲಿ ರಮ್ಯತಾಣ ಅಲ್ಲಿ ನಿನಗೆ ವಂದನ
ಎಲ್ಲಿ ಎಲ್ಲಿ ಪುಣ್ಯ ಧಾಮ ಹೂವು ಧವನ ಚಂದನ ||ಎಲ್ಲಿ ಎಲ್ಲಿ||

ತುಂಗೆ ಕೃಷ್ಣೆ ಕಾವೇರಿ ನಿನ್ನ ಪ್ರಾಣ ಸ್ಪಂದನ
ಹರಿದ್ವರ್ಣ ತರು ಸುಪರ್ಣ ವಿಪಿನ ಸ್ವಪ್ನ ನಂದನ
ಪಶ್ಚಿಮಾದ್ರಿ ದರಿತಟಾಕ ಘಟ್ಟನಾಕ ಸದೃಶ
ಬಯಲು ಸೀಮೆ ತೆನೆಸುಭೀಕ್ಷೆ ಕಲ್ಪ ವೃಕ್ಷ ಪರವಶ ||ಎಲ್ಲಿ ಎಲ್ಲಿ||

ಬಸದಿ ಚರ್ಚು ಗುಡಿ ಮಸೀದಿ ಅಗ್ಗಳಿಕೆಯ ಕೇತನ
ಬಾಣವೆನಿತು ಸತ್ಯದೆಡೆಗೆ ಬತ್ತಳಿಕೆ ಸಚೇತನ
ಕಪಾಲಿಕ ಲಕುಲ ಶಕ್ತಿ ನಾಗಪಂಥ ಸರಿಸಮ
ಅಂತೆ ಜಿನ ಫಕೀರ ಸಂತ ಎಲ್ಲರಿಗು ನಮೋನ್ನಮ ||ಎಲ್ಲಿ ಎಲ್ಲಿ||

ಸುಸಂಸ್ಕಾರ ಸಂಪನ್ನಳು ಕನ್ನಡಾಂಬೆ ಧನ್ಯಳು
ವಿವಿಧ ಜನ ಅನನ್ಯೆ ಮಾನ್ಯೆ ಸಚ್ಚಿದಂಶ ಜನ್ಯಳು
ರತ್ನದಂತೆ ಕಂದರಮಿತ ಪ್ರತಿಭಾ ಪ್ರಭೆ ಹಬ್ಬಲಿ
ನುಡಿಪರಾಗ ಅತಿಸರಾಗ ವಿಶ್ವವನ್ನೆ ತಬ್ಬಲಿ,ವಿಶ್ವವನ್ನೆ ತಬ್ಬಲಿ, ವಿಶ್ವವನ್ನೆ ತಬ್ಬಲಿ||ಎಲ್ಲಿ ಎಲ್ಲಿ||

PS: ನಮ್ ಸ್ಕೂಲ್ ಅಲ್ಲಿ ಈ ಹಾಡು ಹಾಡ್ತಾ ಇದ್ವಿ .. :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ